ವಚನ ವಿಚಾರ – ಯಾರೂ ಇಲ್ಲವೆಂದು

ವಚನ ವಿಚಾರ – ಯಾರೂ ಇಲ್ಲವೆಂದು

ಆರೂ ಇಲ್ಲವೆಂದು ಆಳಿಗೊಳಲುಬೇಡ ಕಂಡೆಯಾ
ಏನ ಮಾಡಿದಡೂ ಆನಂಜುವಳಲ್ಲ
ತರಗೆಲೆಯ ಮೆಲಿದು ಆನಿಹೆನು
ಸರಿಯ ಮೇಲೊರಗಿ ಆನಿಹೆನು
ಚೆನ್ನಮಲ್ಲಿಕಾರ್ಜುನಯ್ಯಾ
ಕರ ಕೇಡನೊಡ್ಡಿದಡೆ ಒಡಲನು ಪ್ರಾಣವನು ನಿಮಗರ್ಪಿಸಿ ಶುದ್ಧಳಹೆನು

[ಆರೂ-ಯಾರೂ, ಆಳಿಗೊಳಲುಬೇಡ-ದುಃಖಗೊಳ್ಳಬೇಡ, ಆನಂಜುವಳಲ್ಲ-ನಾನು ಹೆದರುವವಳಲ್ಲ, ಆನಿಹೆನು-ನಾನಿರುವೆನು, ಸರಿ-ಕತ್ತಿಯ ಅಲಗು, ಕರ ಕೇಡು-ಅತಿಯಾದ ಕಷ್ಟ]

ಅಕ್ಕ ಮಹಾದೇವಿಯ ವಚನ. ಈ ವಚನವನ್ನು ಯಾರಿಗೆ ಹೇಳುತ್ತಿರಬಹುದು? ತನಗೆ ತಾನೇ, ಅಥವಾ ತನ್ನನ್ನು ಪರೀಕ್ಷಿಸಲು ಬಯಸಿದ ಮತ್ತೊಬ್ಬರಿಗೆ, ಅಥವ ಚನ್ನಮಲ್ಲಿಕಾರ್ಜುನನಿಗೇ ಹೇಳುತ್ತಿದ್ದಾಳೆಯೋ ಏನೋ. ಮೂರನೆಯ ಸಾಧ್ಯತೆ ಸೂಕ್ತವೆನಿಸುತ್ತದೆ.

ನನಗೆ ಯಾರೂ ಇಲ್ಲ, ಅನಾಥಳು ಎಂದು ನಿರ್ಲಕ್ಷ್ಯ ಮಾಡಬೇಡ, ನಾನು ತರಗೆಲೆಗಳನ್ನು ತಿಂದುಕೊಂಡಿದ್ದೇನೆ. (ಮರದ ಎಲೆಗಳನ್ನೇ ತಿಂದುಕೊಂಡು ತಪಸ್ಸು ಮಾಡುವ ಕ್ರಮವೂ ಇತ್ತೆಂದು ತೋರುತ್ತದೆ. ಗಿರಿಜೆಯು ಶಿವನ ಕುರಿತು ತಪಸ್ಸು ಮಾಡಿದಾಗ ಕೆಲವು ಕಾಲ ಎಲೆಗಳನ್ನೇ ತಿಂದು ಇದ್ದಳೆಂಬ ಕಥೆ ಇದೆ). ಚೂಪಾದ ಕತ್ತಿಯ ಮೇಲೆ ಒರಗಿದ್ದೇನೆ. ಚನ್ನಮಲ್ಲಿಕಾರ್ಜುನನನ್ನು ಬಯಸಿ ನನಗೆ ನಾನೇ ಹೀಗೆ ದಂಡನೆ ಕೊಟ್ಟುಕೊಳ್ಳುತ್ತಿರುವಾಗ ಇನ್ನೇನು ಆಗಲು ಸಾಧ್ಯ. ಚನ್ನಮಲ್ಲಿಕಾರ್ಜುನ ಇನ್ನೂ ಅತಿ ಕೆಡುಕನ್ನೇನಾದರೂ ಒಡ್ಡಿದರೆ ದೇಹ, ಪ್ರಾಣ ಎರಡನ್ನೂ ಅವನಿಗೇ ಅರ್ಪಿಸಿಬಿಡುತ್ತೇನೆ.

ನನಗೆ ಇರುವುದು ಚೆನ್ನಮಲ್ಲಿಕಾರ್ಜುನ ಮಾತ್ರ ಅವನೇ ನನನ್ನು ಯಾರೂ ಇಲ್ಲವೆಂದು ನಿರ್ಲಕ್ಷ್ಯ ಮಾಡಿದರೆ ಅದೇ ಪರಮ ಕೇಡು. ಹಾಗೆ ಮಾಡಿಯಾನೇ ಎಂಬ ಆತಂಕದ ದನಿಯೂ ಇಲ್ಲಿ ಕೇಳುವುದೇ? ಹಾಗಾಗುವುದಾದರೆ ಪ್ರಾಣ, ದೇಹ ಎರಡೂ ಅವನಿಗೇ ಅರ್ಪಣೆಯಾಗಲಿ ಅನ್ನುವಾಗ ಹತಾಶೆ ಇದೆಯೋ, ಗಟ್ಟಿ ಮನಸ್ಸು ಇದೆಯೋ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೀಳ್ದ ಕುಸುಮ
Next post ನಿಗೂಢ

ಸಣ್ಣ ಕತೆ

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys